ಬಂದೆಯಾ ಬಾ, ಬಂದಾಯಿತಲ್ಲ
ಇನ್ನೇಕೆ ಮೀನಮೇಷ.
ಮೂರು ಬಿಟ್ಟು ನಿಂತಿರುವ ಅಭ್ಯಾಗತ
ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ
ನಿನ್ನದೇನು ಹೆಚ್ಚುಗಾರಿಕೆ
ಅರವತ್ತರಲ್ಲಿ ನೀನು ಒಬ್ಬ.
ಹೊಸ ವೇಷ ಹಳೆ ಹೆಸರು
ಬರಿಗೈಯಲ್ಲಿ ಬಂದಿರುವೆಯಾ ಹೇಗೆ?
ಏನೇನು ತಂದಿರುವೆ ಕೊಡುಗೈದಾನಿ
ಇದೇನಿದು ಉಂಡೆಗಾತ್ರ ಬೆಲ್ಲ
ಬೆಟ್ಟದಷ್ಟು ಬೇವು.
ಕೈಯಲ್ಲಿ ಕಡೆಗೋಲು, ಪೆಟ್ರೋಲು
ಯಾರಿಗೇನು ಕಡಿಮೆಯಿಲ್ಲದ ಸವಾಲು.
ಒಂದು ಒಳ್ಳೆ ಮಾತು ಕಿವಿಗೊಟ್ಟು ಕೇಳಿ
ಹೇಗೆ ಬಂದೆಯೋ ಹಾಗೆ
ಸದ್ದಿಲ್ಲದೆ ಹಿಂದಿರುಗು
ಇದ್ದಾರಿಲ್ಲಿ ನಯವಂಚಕರು
ಗೋಮುಖ ವ್ಯಾಘ್ರರು, ದೇಶದ್ರೋಹಿಗಳು
ಮಾಡಬಾರದ್ದು ಮಾಡಿ ಗೂಬೆ ಕೂರಿಸುತ್ತಾರೆ.
ರಾಜಕೀಯ ಚದುರಂಗದಾಟಕ್ಕೆಳೆದು
ಕೋಮುಗಲಭೆಯ ಹೆಸರಲ್ಲಿ.
ಮುಗ್ಧ ಜನರ ಮಾರಣಹೋಮ
ಬೆಲೆಗಳ ಗಗನಕ್ಕೇರಿಸಿ
ಬಂಡವಾಳ ಬರಿದಾಗಿಸಿ
ಬಡವರ ಆತ್ಮಹತ್ಯೆಯ ಹುನ್ನಾರ
ಹಣ್ಣು ತಿಂದು ಸಿಪ್ಪೆ ಎಸೆವರು
ನನಗೇನು ನಿನಗೆ ಕೆಟ್ಟ ಹೆಸರು
ಅಯ್ಯೋ ಪಾಪ ಬಂದಿದ್ದೀಯಾ
ಇದ್ದುಬಿಡು ಇಷ್ಟ ಮಿತ್ರನಂತೆ
ದಾಖಲೆಯಾಗಲಿ ಸವಿನೆನಪಗಳು
ಶಾಶ್ವತವಾಗಲಿ ಹೆಜ್ಜೆ ಗುರುತುಗಳು
ಮನುಕುಲ ಹಾಡಿ ಹೊಗಳಲಿ
ಸ್ಮರಿಸಲಿ ನಿನ್ನ ಔದಾರ್ಯ.
*****
Related Post
ಸಣ್ಣ ಕತೆ
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…